ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಗಳವರ ೬೩ನೇ ಪುಣ್ಯಾರಾಧನೆ
Date : 07-05-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಮೌನಮುನಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ ೬೩ನೇ ಪುಣ್ಯಾರಾಧನೆ ಕಾರ್ಯಕ್ರಮ ದಿನಾಂಕ: ೦೭-೦೫-೨೦೨೫ ರಂದು ಮುಂಜಾನೆ ಉಭಯ ಶ್ರೀಗಳವರ ಅಭಿಷೇಕದ ಪೂಜೆಯೊಂದಿಗೆ ಪ್ರಾರಂಭವಾಗಿ ನಂತರ ೯ ಘಂಟೆಯಿAದ ೧೨-೩೦ ಘಂಟೆಯವರೆಗೆ ಪೂಜ್ಯ ಮಹಾತ್ಮರಿಂದ, ಸ್ವಾಮಿಜಿಗಳಿಂದ “ಸ್ಥಿತ ಪ್ರಜ್ಞ ಗುರುನಾಥಾರೂಢರು” ಎಂಬ ವಿಷಯದ ಕುರಿತು ಪರಮ ಪೂಜ್ಯ ಡಾ|| ಶ್ರೀ ಶಿವಾನಂದಭಾರತಿ ಮಹಾಸ್ವಾಮಿಗಳವರು ಮಾತನಾಡುತ್ತಾ “ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಬ್ರಹ್ಮನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಗುರುನಾಥಾರೂಢ ಮಹಾಸ್ವಾಮಿಗಳಿಗೆ ತೋರಿಸಿಕೊಟ್ಟರು. ಗುರುವಿನ ಸೇವೆಯನ್ನು ಭಕ್ತಿ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿದ್ದಾದರೆ ಸದ್ಗುರು ಒಲಿಯುತ್ತಾನೆ. ಕಲಿಯುಗದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರು ಮಾನವ ಜನ್ಮ ಉದ್ಧಾರಕ್ಕೋಸ್ಕರವಾಗಿ ಅವತರಿಸಿದ್ದು ಮುಮುಕ್ಷÄಗಳಿಗೆ ಕೇವಲ ನಾಮಸ್ಮರಣೆಯಿಂದಲೆ ಮುಕ್ತಿಯನ್ನು ನೀಡುತ್ತಾ ಬಂದಿರುತ್ತಾರೆ ಆದ್ದರಿಂದ ನಾವೆಲ್ಲರೂ ಪ್ರತಿ ದಿನ ಪ್ರತಿ ಕ್ಷಣ ನಾಮಸ್ಮರಣೆ ಮಾಡುತ್ತಾ ಸದ್ಗುರುವಿನ ಕೃಪೆಗೆ ಪಾತ್ರರಾಗಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ನುಡಿದರು” ಈ ಬ್ರಹ್ಮ ವೇದಿಕೆಯಲ್ಲಿ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ನಾಗೇಶ್ವರ ಸ್ವಾಮಿಗಳು, ಉಪ್ಪಾರಟ್ಟಿ, ಪರಮ ಪೂಜ್ಯ ಶ್ರೀ ಮಲ್ಲೇಶ್ವರ ಶಿವಶರಣರು, ಹಡಗಿನಾಳ, ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಶಾಂತಾನAದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಆತ್ಮಾನಂದ ಸ್ವಾಮಿಗಳು,ತಳಕಟ್ನಾಳ, ಪರಮ ಪೂಜ್ಯ ಶ್ರೀ ಕೃಷ್ಣಾನಂದ ಸ್ವಾಮಿಗಳು,ಯಕನಳ್ಳಿ, ಪರಮ ಪೂಜ್ಯ ಶ್ರೀ ಭೀಷ್ಮಗೌಡರ ಪಾಟೀಲ, ಪರಮ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಸದಾನಂದ ಸ್ವಾಮಿಗಳು, ಮಹಾಲಿಂಗಪೂರ, ಮಾತೋಶ್ರೀ ಅಮೃತಾನಂದಮಯಿ, ಗುಲಬುರ್ಗಾ, ಮಾತೋಶ್ರೀ ಜಾನಮ್ಮ ತಾಯಿಯವರು, ದೇವರಹುಬ್ಬಳ್ಳಿ, ಮಾತೋಶ್ರೀ ಲಲಿತಮ್ಮತಾಯಿ, ಕಲ್ಲೂರ, ಮಾತೋಶ್ರೀ ಅರುಣಾ ತಾಯಿ, ಸೊಲ್ಲಾಪುರ, ಮಾತೋಶ್ರೀ ದಯಾಭಾರತಿ ತಾಯಿ, ಬದಾಮಿ ಇವರು ಉಪಸ್ಥಿತರಿದ್ದರು ಹಾಗೂ ಶ್ರೀಮಠದ ಚೇರ್ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಎಲ್ಲ ಪೂಜ್ಯರನ್ನು ಗೌರವಿಸಿದರು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು. ಸದರ ಕಾರ್ಯಕ್ರಮವನ್ನು ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ದಿನಾಂಕ:-೦೭.೦೫.೨೦೨೫ ರಂದು ೯ ಘಂಟೆಯಿAದ ೧೨-೩೦ ಘಂಟೆಯವರೆಗೆ ಪೂಜ್ಯ ಮಹಾತ್ಮರುಗಳ ಪ್ರವಚನ, ಮಧ್ಯಾಹ್ನ ೧೨-೩೦ ಘಂಟೆಗೆ ಶ್ರೀಗಳವರ ಪಾಲಕಿಯು ನಗರದಲ್ಲಿ ಸಂಚರಿಸಿ ಸಾಯಂಕಾಲ ೫ ಘಂಟೆಗೆ ಶ್ರೀಮಠಕ್ಕೆ ಬಂದ ನಂತರ ಕೈಲಾಸ ಮಂಟಪದ ಪೂಜೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡಿತು.